ಇದು ವೇದಗಳ ಕಾಲದ ರಾಜಕೀಯ ಕಾದಂಬರಿ. ಈಜಿಪ್ಟಿನ ರಾಜಮನೆತನದಲ್ಲಿ ಇರುವಂತೆ ಅಯೋಧ್ಯೆಯ ಸೂರ್ಯವಂಶದ ರಾಜಮನೆತನದಲ್ಲಿ ಬೇರೆಯವರ ರಕ್ತ ರಾಜವಂಶದವರಲ್ಲಿ ಸೇರಿ ಅಶುದ್ದವಾಗದಂತೆ ತಡೆಯಲು ಇಲ್ಲಿ ಅಣ್ಣ-ತಂಗಿಯೊಂದಿಗೆ ವಿವಾಹ ಮಾಡುತ್ತಾರೆ.ರಾಜಮನೆತನದ ಈ ವಿಶಿಷ್ಟ ವಿವಾಹ ಪದ್ದತಿ ಹೇಗೆ ಮರೆಯಾಯಿತೆಂಬುದೇ ಈ ಕಾದಂಬರಿಯ ವಸ್ತು. ಪುಣೇಕರರ ಅದ್ಭುತ ನಿರೂಪಣೆ ಶೈಲಿಯಿಂದ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.
– ಮಹಾಲಿಂಗಪ್ಪ ಉಪ್ಪಾರಹಟ್ಟಿ