ನಾನು ಓದಿದ ಪುಸ್ತಕ :- #ಗಣಪತಿಯ_ಕಲ್ಪನೆ
ಲೇಖಕರು :- ಆಚಾರ್ಯ ಸಾ.ಕೃ.ರಾಮಚಂದ್ರ ರಾವ್
ದೇವರು ಅದು ಒಂದು ಕಲ್ಪನೆಯೇ.. ಶಕ್ತಿಯೇ.. ಸತ್ಯವೇ ಎಂಬ ಪ್ರಶ್ನೆಗಳು ಮನುಷ್ಯನ ಮನಸ್ಸಿನಲ್ಲಿ ಆಗಾಗ ಕಾಡುವ ಪ್ರಶ್ನೆಗಳು, ದೇವರೆಡೆ ಒಂದು ಚಿಂತನೆ, ಜಿಜ್ಞಾಸೆ ನಿರಂತರವಾಗಿರುವ ಸಂಗತಿ.. ಈ ನಿಟ್ಟಿನಲ್ಲಿ ನಮ್ಮ #ಆಸ್ತಿಕತ್ವವನ್ನು ಧೃಡಗೊಳಿಸಲು ಈ ಚಿಕ್ಕ ಪುಸ್ತಕ ಅಮೂಲ್ಯವಾಗಿದೆ ಎನ್ನಬಹುದು.
ನಮ್ಮ ದೇಶದಲ್ಲಿ ಗಣಪತಿಯಷ್ಟು ನಂಬಿದ ದೇವರು ಇನ್ನೂಂದಿಲ್ಲ, ಪ್ರತಿ ನಗರ ಹಾಗೂ ಗ್ರಾಮದ ಪ್ರತಿ ಮನೆಯಲ್ಲೂ ಗಣಪತಿಯನ್ನೇ ಇಷ್ಟ ದೇವರೆಂಬುವುದು ಸಹಜ ಅದರೆ ಈ ಗಣಪತಿಯ ಪೂಜೆ ಎಷ್ಟು ಪ್ರಾಚೀನವಾಗಿದೆ ..ಅದು ವೈದಿಕ ಯುಗದಿಂದ ಅಂದರೆ ಸುಮಾರು ಎಂಟು ಸಾವಿರ ವರ್ಷಗಳ ಹಿಂದಿನಿಂದಲೂ ಗಣಪತಿಯ ಆರಾಧನೆ ನಮ್ಮ ದೇಶದಲ್ಲಿ ಇತ್ತು. ಆರ್ಯ ದ್ರಾವಿಡ ಎಲ್ಲಾ ಸಂಸ್ಕೃತಿಗಳು ಗಣಪತಿಯ ಒಳಗೊಂಡಿದೆ ಎಂದು ನಿರೂಪಿಸುವ ಲೇಖಕರು.. ಮುಂದೆ..ಶಿವ ಹಾಗೂ ಗಣಪತಿಯ ಸಂಭಂದಗಳು.. ಗೌರಿಯ ಪುತ್ರನಾದ ಸಮಯ.. ವಿದ್ಯಾಗಣಪತಿಯಾಗಿ ಪೂಜಿಸಿದ ಕಾಲ.. ಹಾಗೇ ಕಾಲ ಕಾಲಕ್ಕೆ ಬದಲಾದ ಸ್ವರೂಪ...ಹೀಗೆ ಒಂದು ದೇವರು ಜನಮಾನಸದಲ್ಲಿ ಬೆಳೆದು ಉಳಿದ ವಿಚಾರವನ್ನು ಚಿಕ್ಕದಾಗಿ ಚೆನ್ನಾಗಿ ವಿವರಿಸಿದ್ದಾರೆ..
ಹೀಗೆ ನಮ್ಮ ಸನಾತನ ಸಂಸ್ಕೃತಿಯೆಡೆಗೆ ಸಾಮಾನ್ಯರಿಗೂ ಅರ್ಥವಾಗುವಂತೆ ಚಿಂತನೆಗೆ ಹಚ್ಚುವಂತೆ ಅದರಿಂದ ಇನ್ನಷ್ಟು ನಮ್ಮೊಳಗೆ, ಸಮಾಜದ ಒಳಗೆ #ಗಟ್ಟಿಯಾಗುವಂತಹಃ ಇಂತಹಃ ಪುಸ್ತಕದ ಅವಶ್ಯಕತೆ ಸಾಹಿತ್ಯ ಲೋಕಕ್ಕೂ ಅದರ ಓದುಗರಿಗೂ ಇದೆ.. ಅದಕ್ಕಾಗಿ ಪೂಜ್ಯ ಲೇಖಕರಂತೆ ಪ್ರಕಾಶಕರಾದ ಶ್ರೀಯುತ ಸೂರ್ಯಪ್ರಕಾಶ ಪಂಡಿತರೂ ಅಭಿನಂದನಾರ್ಹರು..
–ದೀಪಕ್ ಹುಲ್ಕುಳಿ
ಪ್ರಕಾಶಕರು :- ಅಭಿಜ್ಞಾನ, ಬೆಂಗಳೂರು ಮುದ್ರಣದ ವರ್ಷ:- 2008
ಹಣ :- ₹.60/-
ದೂರವಾಣಿ :- 9448494949