ನಾನು ಓದಿದ ಪುಸ್ತಕ : #ಜೀವಜಾಲ
ಲೇಖಕರು : ಕೆ.ಪುಟ್ಟಸ್ವಾಮಿ, ಕೃಪಾಕರ, ಸೇನಾನಿ
ಪರಿಸರದಒಂದುಚಿಕ್ಕಭಾಗನಾವು
ನಮಗಾಗಿಯೇ_ಪರಿಸರವಲ್ಲ
ಮನುಷ್ಯ ಎಂಬ ಜೀವಿ ಪರಿಸರದ ಒಂದು ಭಾಗ ನಮ್ಮಂತೆ ಅನೇಕ ಜೀವಿಗಳ ಹಾಗೂ ನಿರ್ಜೀವಿಗಳಿಂದಾದ ಕಣ್ಣಿಗೆ ಕಾಣದ ವ್ಯವಸ್ಥಿತವಾದ ಬಿಡಿಸಲಾಗದ ಕೊಂಡಿಯೇ ಈ #ಜೀವಜಾಲ.
ಈ ಪುಸ್ತಕ ಕನ್ನಡದ ಅಪರೂಪದ ಪರಿಸರ , ಪ್ರಕೃತಿ ಹಾಗೂ ಜೀವ ವೈವಿದ್ಯಗಳ ಸಮೃದ್ಧ ವಿಚಾರಗಳ ಸಂಗ್ರಹ ಇಲ್ಲಿ ಭೂಮಿಯ ಹುಟ್ಟಿನಿಂದ ಇಂದಿನವರೆಗಿನ ಬೆಳವಣಿಗೆಗಳನ್ನು ವೈಜ್ಞಾನಿಕವಾಗಿ ಸುಂದರವಾಗಿ ಬರೆದಿದ್ದಾರೆ. ಆಹಾರ ಸರಪಳಿಯಿಂದ ಶುರುವಾಗಿ ಅಣಬೆಗಳ ವೈಶಿಷ್ಟ್ಯ, ಹುಲ್ಲಿನ ಬೆಳೆಗಳ ವಿಶೇಷತೆ, ಪ್ರಾಣಿಗಳ ಸಾಮ್ರಾಜ್ಯ ಗಡಿಗಳು ಹಾಗೂ ಸಂಸಾರ, ಸಂವಹನ, ಆಕ್ರಮಣ ಶೀಲತೆ ಹಾಗೂ ಪ್ರಾಣಿಗಳ ಪರೋಪಕಾರಿ ಗುಣಗಳು, ಸಾಂಘಿಕ ಪ್ರವೃತ್ತಿ, ಹೀಗೆ ಮುಂದುವರೆದು..
ಪಕ್ಷಿಗಳ ವಿಶ್ವ ಪರ್ಯಟನೆ ಅವುಗಳ ಸ್ವಯಂವರ, ವಂಶಾಭಿವೃದ್ಧಿ ವಿಚಾರಗಳು,ಅವುಗಳ ಗೂಡಿನ ವಿಶೇಷತೆಗಳು,ಸಾಲ್ಮನ್ ಮೀನುಗಳ ಜೀವನ ಯಾತ್ರೆ, ಮಾಂಸಹಾರಿ ಸಸ್ಯಗಳು,ಮರುಭೂಮಿಯ ಜೀವ ವೈವಿಧ್ಯಗಳು, ಛದ್ಮ ವೇಷಧಾರಿಗಳು, ಗೆದ್ದಲು ಹುಳುಗಳ ವಂಶಾಭಿವೃದ್ಧಿ, ಹೀಗೆ ಮುಂದುವರೆದು,
ಸಹಜವಾಗಿ ಹೊಂದುವ #ವಂಶನಾಶಗಳ ಜೋತೆಗೆ ಡೈನೋಸಾರಗಳ ವಂಶನಾಶ, ಡೋ ಡೋ ಹಕ್ಕಿಯ ನಾಶ, ಅಮೆರಿಕದ ಪ್ಯಾಸೆಂಜರ್ ಪಾರಿವಾಳ ಕೆನಾಡದ ಗ್ರೇಟ್ ಆಕ್ ಹೀಗೆ ಅನೇಕ ಮನುಷ್ಯನಿಂದ ಸರ್ವನಾಶ ಹೊಂದಿದ ಪರಿಸರದ ವಿಚಾರಗಳು ಬೇಸರ ತರುತ್ತವೆ.ವಂಶನಾಶ ಎನ್ನುವುದು ವಿಕಾಸದ ಹಾದಿಯಲ್ಲಿ ಎದುರಾಗುವ ಪ್ರಕ್ರೀಯೆ ನಿಜ ಆದರೆ ಅದಕ್ಕೆ ಮನುಷ್ಯನೇ ಕಾರಣ ಎಂಬುವುದೇ ಅತ್ಯಂತ ನೋವಿನ ವಿಷಾದದ ಸಂಗತಿ. #ಅಭಿವೃದ್ಧಿ_ಅನೀವಾರ್ಯ ಆದರೆ #ನಾಶ_ಅನೀವಾರ್ಯವಲ್ಲ, ಒಂದು ಚೌಕಟ್ಟಿನ ಬದುಕು ಮನುಷ್ಯನಿಗೆ ಬೇಕು ಪರಿಸರದ ವ್ಯವಸ್ಥೆಗೆ ಸಮ ಪಾಲುಧಾರರಿದ್ದಾರೆ ಎಂಬ ಅರಿವು ನಮಗಿದ್ದರೆ ಚೆಂದ, ನಾಶವಾದ ಒಂದು ಪ್ರಾಣಿ ಸಂಕುಲ ನಮ್ಮ ಮುಂದಿನ ಪೀಳಿಗೆಯ ಸರ್ವನಾಶದ ಪ್ರತೀಕ ಎಂಬ ತಿಳುವಳಿಕೆಯೇ ನಮಗಿರಬೇಕಾದ ಜವಾಬ್ಧಾರಿ. ಈ ನಿಟ್ಟಿನಲ್ಲಿ ಇಂತಃಹ ಒಳ್ಳೆಯ ಪುಸ್ತಕ ಶಾಲೆಗಳ ಕಾಲೇಜುಗಳ ಮಕ್ಕಳ ಕೈಗೆ ಸಿಗಬೇಕು ಅವರು ಓದುವಂತಾಗಬೇಕು, ಹಾಗೂ ಪರಿಸರದ ಮೇಲೆ ಗೌರವ ಹಾಗೂ ಪ್ರೀತಿ ಮೂಡಬೇಕು ಆಗ ನಾವು ನಮ್ಮ ಜನಾಂಗ ಬದುಕುಳಿದೇವು.
ಸೃಷ್ಟಿಸಲಾಗದಮನುಷ್ಯನಿಗೆನಾಶದ_ಹಕ್ಕಿಲ್ಲ
ಪ್ರಕಾಶಕರು :- ಅಭಿನವ ಪ್ರಕಾಶನ, ಬೆಂಗಳೂರು ಮರು ಮುದ್ರಣದ ವರ್ಷ:- 2014
ಹಣ :- ₹.158/-
– ದೀಪಕ್ ಹುಲ್ಕುಳಿ