ಕನ್ನಡ · ಸದ್ಯೋಜಾತ ಭಟ್ಟ

‘ನಾಸತ್ಯ’ – ಸದ್ಯೋಜಾತ ಭಟ್

ನಾನು ಓದಿದ ಪುಸ್ತಕ :- #ನಾಸತ್ಯ
ಲೇಖಕರು :- ಸದ್ಯೋಜಾತ ಭಟ್

ನಾಸತ್ಯವೆಂದರೆಬೆಳಕನ್ನುಸೃಜಿಸಿದ_ಸತ್ಯ

ನಾಸತ್ಯ ಅಂದರೆ ಸುಳ್ಳನ್ನು ನುಡಿಯದವರು.. ಅಂದರೆ #ಅಶ್ವಿನಿ_ದೇವತೆಗಳು.. ಹಾಗೇ ಸುಳ್ಳಲ್ಲದೇ ಇರುವುದು..‌ ಸತ್ಯವೂ ಹೌದು.... ಇದು ಪುಸ್ತಕ ಹೆಸರಿನ ಅರ್ಥ.. ಪುಸ್ತಕದ ಒಳಗಿರುವ ಹೂರಣವೂ ಸಹ...‌ಸಾಮಾನ್ಯವಾಗಿ ವೇದಗಳೆಂದರೆ ಜನ ಸಾಮಾನ್ಯರ ಬುದ್ಧಿಗೆ ನಿಲುಕದ್ದು.. ಅದು ಕೈಗೆಟುಕದ ಸಂಪತ್ತು ಎನ್ನುವ ಸಾಮಾನ್ಯ ಪ್ರಜ್ಞೆಯಿಂದ ಹೊರ ತರುವ ಪ್ರಯತ್ನ ಈ ಪುಸ್ತಕದಲ್ಲಿ ಲೇಖಕರಿಂದ ಆಗಿದೆ.. ವೇದಗಳಲ್ಲಿನ ಕಥೆಗಳನ್ನು ಸಂಗ್ರಹಿಸಿದ ಪುಸ್ತಕವಿದು.. ವಿಶೇಷವಾಗಿದೆ... ಇಲ್ಲಿ ಅನೇಕ ಇತಿಹಾಸದ ಪ್ರಶ್ನೆಗಳಿಗೆ ಉತ್ತರವಿದೆ.. ಉಲ್ಲೇಖಗಳಿವೆ.. ಗಣಾನಾಂ ತ್ವಾ ಗಣಪತಿಂ.. ಈ ಮಂತ್ರದ ಬಗ್ಗೆ.. ಸೂರ್ಯನ ಚಿಕೆತ್ಸೆಗಳ ಬಗ್ಗೆ.. ಜಮದಗ್ನಿ ಮಹರ್ಷಿ..ಮಂಧಾತೃವಿನ ಬಗ್ಗೆ.. ವಿಶ್ವಾಮಿತ್ರ.. ವಸಿಷ್ಠರ ಬಗ್ಗೆ..ಸಕ್ಕರೆಯ ಬಗ್ಗೆ.. ಗಾಯತ್ರಿ ಛಂಧಸ್ಸುಗಳ ಬಗ್ಗೆ.. ರಾಷ್ಟ್ರಂಧಾರಯತಾ ಧ್ರುವಂ.. ರಾಜಧರ್ಮದ ಬಗ್ಗೆ.. ವಾತಾಪಿ ಜೀರ್ಣೋ ಭವದ ಬಗ್ಗೆ ಜಿಜ್ಞಾಸೆ.. ಸರಸ್ವತಿ ನದಿಯ ಬಗ್ಗೆ... ಮುದ್ಗಲ ಮಹರ್ಷಿಯ ಬಗ್ಗೆ ಅಂತಿಮವಾಗಿ ಬ್ರಾಹ್ಮಣೋsಸ್ಯಮುಖಮಾಸೀತ್ ಈ ಶ್ಲೋಕದ ಬಗ್ಗೆ ಸವಿಸ್ತಾರವಾದ ವಿವರಣೆಯಿದೆ..

ವೇದದ ಕಥೆಗಳು ಅಂತಾಕ್ಷಣ ನಾವೇನೂ ರಸವತ್ತಾದ ವಿಶೇಷಗಳನ್ನು ಕಾಣಬೇಕಿಲ್ಲ.. ಬಹುಷಃ ಲೇಖಕರು ಗೌರವಕ್ಕೆ ಪಾತ್ರರಾಗುವುದೇ ಇಲ್ಲಿ .. ಪುಸ್ತಕಕ್ಕೆ ಅನ್ವರ್ಥವಾಗುವಂತೆ ವೇದಗಳಲ್ಲಿ ಇರುವುದಷ್ಟೇ ಹೇಳಿದ್ದಾರೆ ಅದಕ್ಕೆ ತಮ್ಮ ಕಲ್ಪನೆಯನ್ನು ತಲೆ ಬಾಲಗಳನ್ನು ಜೊಡಿಸಿಲ್ಲ.. ಓದುಗರಿಗೆ ನಿರಾಸೆ ಎನ್ನಿಸಿದರೂ ಸತ್ಯದ ನೆಲೆ ಇಷ್ಟವಾಗುತ್ತದೆ..

ಹಾಗೇ ಮುನ್ನುಡಿಯಲ್ಲಿ ಹಿರಿಯರಾದ #ಸೇತುರಾಮ್ ಹೇಳಿರುವಂತೆ ವೇದಗಳ ಉಲ್ಲೇಖ ಎನ್ನುವುದು ತಿಳಿದು ವಿವರಿಸಿದವರು ವಿರಳ ಎನ್ನುವಂತೆ ವೇದಗಳು ಎನ್ನುವುದು ಕುರುಡು ಪ್ರಪಂಚದಲ್ಲಿ ಬೆಳಕಿನ ಕಿಡಿ.. ಎನ್ನುವುದು ಇಂತಹಃ ಪುಸ್ತಕಗಳಿಂದ ಮಾತ್ರಾ ಸುಳ್ಳಾಗಿಸಲು ಸಾಧ್ಯ.. ಹಾಗೂ ಅದು ಎಲ್ಲಾರನ್ನೂ ಸುಲಭವಾಗಿ ಗೌರವ ಮೂಡುವಂತೆ ತಲುಪಿಸಬೇಕು.. ಅದು ತುರ್ತು ಜವಾಬ್ಧಾರಿ ಸಹ.. ಅದಕ್ಕಾಗಿ ಲೇಖಕರು ಸದಾ ವಂದನಾರ್ಹರು… ಯಾಕೆಂದರೆ ವೇದಗಳು ಜನ ಸಾಮಾನ್ಯವಾಗಲು ಇಂತಹಃ ಪುಸ್ತಕದ ಸದಾ ಅಗತ್ಯವಿದೆ..

ವೇದಗಳುದೇಶದಅಸ್ಮಿತೆಎಂಬಅರಿವು_ಬೇಕು

ಅದನ್ನುಮೂಡಿಸುವುದುನಮ್ಮ_ಕರ್ತವ್ಯ


ಪ್ರಕಾಶಕರು :- ಸಮನ್ವಿತ ಪ್ರಕಾಶನ ಬೆಂಗಳೂರು ಮುದ್ರಣದ ವರ್ಷ:- 2019
ಹಣ :- ₹.150/-
PH:-9480709038

ದೀಪಕ್ ಹುಲ್ಕುಳಿ

ನಿಮ್ಮ ಟಿಪ್ಪಣಿ ಬರೆಯಿರಿ